ಸಿರವಾರ : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ನಿಮಿತ್ತ ಜೆಡಿಎಸ್ ನ ಜನಪ್ರಿಯ ನಾಯಕರು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಗುರುವಾರ ಸಂಜೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.
ಮಳೆ ಬೆಳೆ ಸುಭೀಕ್ಷವಾಗಿ ಆಗಲಿ, ರೈತರ ಬದುಕು ಸಮೃದ್ಧಿ ಯಾಗಲಿ ಎಂದು ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಬೇಡಿಕೊಂಡರು.
ಈ ವೇಳೆ ಅವರ ಆಪ್ತ ಕಾರ್ಯದರ್ಶಿ ಸೂಗಯ್ಯ ಸ್ವಾಮಿ ಹಿರೇಮಠ ಗಣದಿನ್ನಿ ಸೇರಿದಂತೆ ಆಪ್ತರು ಇದ್ದರು.








