ಸಿರವಾರ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನವಲಕಲ್ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ಪಿಯು ಸೈನ್ಸ್ ಕಾಲೇಜ್ ತಂಡಗಳು ಭರ್ಜರಿ ಸಾಧನೆ ಮಾಡಿವೆ.

ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ, ರೇಣುಕಾದೇವಿ, ಉಪನ್ಯಾಸಕಿಯರಾದ ಚಂದ್ರಮತಿ, ಪದ್ಮಾ ನಂದರೆಡ್ಡಿ, ಶಿವಗಂಗಾ, ವಿಜಯಲಕ್ಷ್ಮಿ, ಚಾಮುಂಡಿ, ಹಾಗು ಪ್ರವೀಣ್ ಸೇರಿದಂತೆ ಶಿಕ್ಷಕ ವೃಂದ, ವಾರ್ಡನ್ ಹಾಗೂ ಎಫ್‌ಡಿಎ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Previous articleಸ್ಮೃತಿ ಮಂಧಾನ ಸ್ಫೋಟಕ ಶತಕ: ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಗೆಲುವು, ಸೆಮಿಫೈನಲ್‌ಗೆ ಭಾರತ
Next articleಮಂತ್ರಾಲಯದ ರಾಯರ ದರ್ಶನ ಪಡೆದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ