ರಾಯಚೂರು

ಸಿರವಾರ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಸಿರವಾರ: ಪಟ್ಟಣದ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಭೆಯಲ್ಲಿ ಸರ್ವಾನುಮತದಿಂದ ಗೌರವಾಧ್ಯಕ್ಷರಾಗಿ ಹುಲಿಗೆಪ್ಪ ಮಡಿವಾಳ ಕೆ.ಆರ್.ಎಸ್, ಅಧ್ಯಕ್ಷರಾಗಿ ಹುಲಿಗೆಪ್ಪ ಮಡಿವಾಳ ನಾಗಡದಿನ್ನಿ, ಉಪಾಧ್ಯಕ್ಷರಾಗಿ ದುರುಗಣ್ಣ ಮತ್ತು ಮಲ್ಲಿಕಾರ್ಜುನ್, ಕಾರ್ಯಾಧ್ಯಕ್ಷರಾಗಿ ಮೌನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ, ಕಾರ್ಯದರ್ಶಿಗಳಾಗಿ ಪ್ರವೀಣ್, ಬಸವ, ಅನಂತರಡ್ಡಿ, ಖಜಾಂಚಿಗಳಾಗಿ ಅನಿಲ್ ಕುಮಾರ್, ಮಲ್ಲಿಕಾರ್ಜುನ್ ಅಮರಪ್ಪ, ಲೆಕ್ಕ ಪರಿಶೋಧಕರಾಗಿ ರಘು ಮಡಿವಾಳ, ಪ್ರಕಾಶ್ ಕಾರ್ಪೆಂಟರ್ ಮತ್ತು ದೇವಸ್ಥಾನದ ಪೂಜಾರಿಯಾಗಿ ಮಲ್ಲಿಕಾರ್ಜುನ್ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಬಿ.ಶರಣಪ್ಪ ಮಡಿವಾಳ, ಸಂಘದ ಉದ್ದೇಶದ ಬಗ್ಗೆ ವಿವರಿಸಿ, ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನೂತನ ಗೌರವಾಧ್ಯಕ್ಷ ಹುಲಿಗೆಪ್ಪ ಕೆ.ಆರ್.ಎಸ್ ಮತ್ತು ಅಧ್ಯಕ್ಷ ಹುಲಿಗೆಪ್ಪ ನಾಗಡದಿನ್ನಿ ಸಮಾಜದ ಸಂಘಟನೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಬೂದೆಪ್ಪ ಮಡಿವಾಳ, ನಾಗಪ್ಪ ಮಡಿವಾಳ, ಬಸವರಾಜ್ ಮಡಿವಾಳ, ಹುಲಿಗೆಪ್ಪ ಮಡಿವಾಳ, ರಾಜು ಮಡಿವಾಳ, ಶಿವಶರಣ ಮಡಿವಾಳ ಮಲ್ಲಯ್ಯ ಮಡಿವಾಳ, ಮೌನೇಶ್, ಹನುಮಂತ, ಬಸವ, ಅನಿಲ್ ಕರೆಗುಡ್ಡ, ಈರಪ್ಪ, ಆನಂದ್ ಮಡಿವಾಳ ಸೇರಿದಂತೆ ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

projectededore

Recent Posts

ಸೆ.7ಕ್ಕೆ ಯರಮರಸನ ಗುಡ್ಡದ ಬಸವೇಶ್ವರ ಜಾತ್ರಾ ಮಹೋತ್ಸವ

ಸಿರವಾರ: ಸಮೀಪದ ಯರಮರಸ್ ಗ್ರಾಮದ ಆರಾಧ್ಯ ದೈವ ಶ್ರೀ ಗುಡ್ಡದ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೆ.7ರ ಸೋಮವಾರ ಜರುಗಲಿದೆ…

18 minutes ago

ಇಂದಿರಾ ನಗರ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಹೊಸ ರುಚಿ’ ಪ್ರಾತ್ಯಕ್ಷಿಕೆ

ಸಿರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣದ ಇಂದಿರಾ ನಗರದ 'ರಂಗಶಿವ' ಜ್ಞಾನ…

2 hours ago

ಕಿಚ್ಚ ಸುದೀಪ ಜನ್ಮದಿನ; ಅಭಿಮಾನಿಗಳಿಂದ ಆಶ್ರಮಕ್ಕೆ ದಿನಸಿ ಧಾನ್ಯ ವಿತರಣೆ

ಸಿರವಾರ: ಚಿತ್ರನಟ ಕಿಚ್ಚ ಸುದೀಪ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಿರವಾರದ ಸುದೀಪ್ ಅಭಿಮಾನಿ ಯುವ ಬಳಗ ಮಾದರಿಯಾಗಿದೆ.…

3 hours ago

ಬಿಜೆಪಿ ಪಾದಯಾತ್ರೆ ರಾಜಕೀಯ ಪ್ರೇರಿತ: ರಝಾಕ್ ಉಸ್ತಾದ್

ರಾಯಚೂರು: ಲಿಂಗಸ್ಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮೈಲೇಜ್ ಪಡೆಯುವ ಉದ್ದೇಶದಿಂದ…

4 hours ago

ಚಾಗಬಾವಿ ಗ್ರಾಮದಲ್ಲಿ ಜಾಬ್‌ ಕಾರ್ಡ್‌ ಮೇಳ: 55 ಹೊಸ ಅರ್ಜಿಗಳ ಸ್ವೀಕಾರ

ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಚಾಗಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ…

5 hours ago

ಕೆಪಿಎಸ್‌ಸಿ ಹಗರಣಗಳ ಮೂಲ ಬಿಜೆಪಿ–ಜೆಡಿಎಸ್ ಆಡಳಿತದಲ್ಲೇ: ಡಿಕೆ ಶಿವಕುಮಾರ್ ಆರೋಪ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಕ್ಕೆ ಸಂಬಂಧಿಸಿದ ಹಗರಣಗಳ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

6 hours ago